ಏಕದಿನ ಪಂದ್ಯದಲ್ಲಿ ತ್ರಿಶತಕ ರನ್‌ ಗಳಿಸುವ ಅವಕಾಶ ನನಗಿತ್ತು, ವೇಗದ ದ್ವಿಶತಕ ಬಾರಿಸಿದ ಇಶಾನ್‌ ಕಿಶನ್

ಏಕದಿನ ಪಂದ್ಯದಲ್ಲಿ ತ್ರಿಶತಕ ರನ್‌ ಗಳಿಸುವ ಅವಕಾಶ ನನಗಿತ್ತು, ವೇಗದ ದ್ವಿಶತಕ ಬಾರಿಸಿದ ಇಶಾನ್‌ ಕಿಶನ್

ಕ್ರಿಕೆಟ್ | 10 ಡಿಸೆಂಬರ್ 2022 | ಡಿಜಿ ಮಲೆನಾಡು.ಕಾಂ

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌ ಅತ್ಯಂತ ವೇಗದ ದ್ವಿಶತಕ ಬಾರಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ವೆಸ್ಟ್‌ ಇಂಡೀಸ್‌ ಆಟಗಾರ ಕ್ರಿಸ್‌ ಗೇಲ್‌ ಹೆಸರಿನಲ್ಲಿದ್ದ ವೇಗದ ದ್ವಿಶತಕ ದಾಖಲೆಯನ್ನು ಮುರಿದಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ನಾಯಕ ರೋಹಿತ್‌ ಶರ್ಮಾ ಗಾಯಗೊಂಡ ಕಾರಣ ಭಾರತ ತಂಡದ 11 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದ ಇಶಾನ್‌ ಕಿಶಾನ್‌, ಶಿಖರ್‌ ಧವನ್‌ ಜತೆ ಇನ್ನಿಂಗ್ಸ್‌ ಆರಂಭಿಸಿದರು. ನಂತರ ವಿರಾಟ್‌ ಕೊಹ್ಲಿ ಜತೆ ಉತ್ತಮವಾಗಿ ಇನ್ನಿಂಗ್‌ ಕಟ್ಟಿದ ಕಿಶಾನ್‌ ಮೊದಲ ದ್ವಿಶತಕ 210 (131) ಬಾರಿಸಿದರು. ಕೊಹ್ಲಿ ಸಹ ಶತಕ 113 (91) ದಾಖಲಿಸಿದರು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‌ ನಷ್ಟಕ್ಕೆ 50 ಓವರ್‌ಗಳಲ್ಲಿ 409 ರನ್‌ ದಾಖಲಿಸಿದೆ.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಇಶಾನ್‌ ಕಿಶನ್‌ 131 ಎಸೆತಗಳಲ್ಲಿ 24 ಬೌಂಡರಿ, 10 ಸಿಕ್ಸರ್‌ ಸಹಿತ 210 ರನ್‌ ಪೂರೈಸಿ ಔಟ್‌ ಆದರು. ಸಚಿನ್‌ ತೆಂಡೂಲ್ಕರ್‌, ವಿರೇಂದ್ರ ಸೆಹ್ವಾಗ್‌, ರೋಹಿತ್‌ ಶರ್ಮಾ ನಂತರ ದ್ವಿಶತಕ ಬಾರಿಸಿದ ನಾಲ್ಕನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅತ್ಯಂತ ಕಿರಿಯ ಕ್ರಿಕೆಟಿಗ ಹಾಗೂ ವಿಶ್ವದ ಏಳನೇ ಬ್ಯಾಟ್ಸ್‌ಮನ್‌ ಆಗಿದ್ದಾರೆ.

“ಏಕದಿನ ಪಂದ್ಯದಲ್ಲಿ ತ್ರಿಶತಕ ಸಿಡಿಸುವ ಅವಕಾಶ ನನಗಿತ್ತು. ನಾನು ಔಟ್‌ ಆದ ಸಂದರ್ಭದಲ್ಲಿ ಇನ್ನೂ 15 ಓವರ್‌ ಬಾಕಿ ಇದ್ದವು. ದ್ವಿಶತಕ ಬಾರಿಸಿದ ದಿಗ್ಗಜ ಕ್ರಿಕೆಟಿಗರ ಹೆಸರಿನ ಜತೆ ನನ್ನ ಹೆಸರು ಕೇಳಲು ಸಂತಸ ಆಗುತ್ತಿದೆ” ಎಂದು ಮೂರನೇ ಏಕದಿನ ಪಂದ್ಯದ ಮೊದಲ ಇನ್ನಿಂಗ್ಸ್‌ ನಂತರ ಇಶಾನ್‌ ಕಿಶಾನ್‌ ಅನಿಸಿಕೆ ವ್ಯಕ್ತಪಡಿಸಿದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

|| ಇದನ್ನೂ ಓದಿ || ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆಯು ಕರ್ನಾಟಕ ರಾಜ್ಯದ ಪ್ರತಿಷ್ಠಿತ ಶಾಖೆಯಾಗಿ ಕಾರ್ಯ, ಶಿವಮೊಗ್ಗ ಶಾಖೆಯ ಚಟುವಟಿಕೆಗಳ ಬಗ್ಗೆ ಶ್ಲಾಘನೆ https://digimalenadu.com/2022/12/ima-shivamogga-news-state-president-visit/

|| ಇದನ್ನೂ ಓದಿ || ಶಿವಮೊಗ್ಗ ನಗರ ಹೇಗಿದೆ ?, ಸಾರ್ವಜನಿಕ ಭಾಗವಹಿಸುವಿಕೆ ಸಮೀಕ್ಷೆಯಲ್ಲಿ ತಪ್ಪದೇ ಪಾಲ್ಗೊಳ್ಳಿ, ನಿಮ್ಮ ಅಭಿಪ್ರಾಯ ದಾಖಲಿಸಿ https://digimalenadu.com/2022/12/shivamogga-city-public-opinion-survey/

|| ಇದನ್ನೂ ಓದಿ || ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಉದ್ಯೋಗ ಮೇಳ ಡಿಸೆಂಬರ್‌ 13ಕ್ಕೆ https://digimalenadu.com/2022/12/udyoga-mela-at-sahyadri-college-december-13/

|| ಇದನ್ನೂ ಓದಿ || ಸದೃಢ ದೇಶ ನಿರ್ಮಾಣ ಮಾಡಲು ಸಾರ್ವಜನಿಕರ ಪಾಲ್ಗೊಳ್ಳುವಿಕೆ ಮುಖ್ಯ https://digimalenadu.com/2022/12/public-perception-survey-styani-chess-master/

|| ಇದನ್ನೂ ಓದಿ || “ಶ್ರೀ ವಾದಿರಾಜರ ತೀರ್ಥಪ್ರಬಂಧ” ಸಂಶೋಧನಾ ಗ್ರಂಥ ಲೋಕಾರ್ಪಣೆ ಡಿಸೆಂಬರ್‌ 10ಕ್ಕೆ, ಲೇಖಕಿ ಡಾ. ಮೈತ್ರೇಯಿ ಆದಿತ್ಯ ಪ್ರಸಾದ್‌ ಅವರ ಕೃತಿ https://digimalenadu.com/2022/12/dr-mythreyi-adithya-prasad-book-release/

digimalenadu

ಶಿವಮೊಗ್ಗ
error: Content is protected !!