ಭರತನಾಟ್ಯ ಗುರು ಶೀಲಾ ಚಂದ್ರಶೇಖರ್‌ ಅವರಿಗೆ ಪರಿಣಿತಿ ಎಕ್ಸಲೆನ್ಸ್‌ ಪುರಸ್ಕಾರ, ಗಮನ ಸೆಳೆದ ವೈವಿಧ್ಯ ನೃತ್ಯ ಪ್ರದರ್ಶನ

ಭರತನಾಟ್ಯ ಗುರು ಶೀಲಾ ಚಂದ್ರಶೇಖರ್‌ ಅವರಿಗೆ ಪರಿಣಿತಿ ಎಕ್ಸಲೆನ್ಸ್‌ ಪುರಸ್ಕಾರ, ಗಮನ ಸೆಳೆದ ವೈವಿಧ್ಯ ನೃತ್ಯ ಪ್ರದರ್ಶನ

ಸಾಗರ | 22 ಜನವರಿ 2023 | ಡಿಜಿ ಮಲೆನಾಡು.ಕಾಂ

ಪರಿಣಿತಿ ಕಲಾಕೇಂದ್ರದ 8ನೇ ವರ್ಷದ ಸಂಭ್ರಮದ ಪ್ರಯುಕ್ತ ಸಾಗರದ ಗಾಂಧಿ ಮೈದಾನದಲ್ಲಿ ಪರಿಣಿತಿ ಕಲಾಕೇಂದ್ರದ ವತಿಯಿಂದ ಆಯೋಜಿಸಿದ್ದ “8ನೇ ವರ್ಷದ ಪರಿಣಿತಿ ರಾಷ್ಟ್ರೀಯ ನೃತ್ಯ ಸಂಗೀತೋತ್ಸವ2023” ಕಾರ್ಯಕ್ರಮದಲ್ಲಿ ಬೆಂಗಳೂರಿನ ಭರತನಾಟ್ಯ ಗುರು ಶೀಲಾ ಚಂದ್ರಶೇಖರ್‌ ಅವರಿಗೆ ಪರಿಣಿತಿ ಎಕ್ಸಲೆನ್ಸ್‌ ಪುರಸ್ಕಾರ ನೀಡಿ ಗೌರವಿಸಲಾಯಿತು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಪರಿಣಿತಿ ರಾಷ್ಟ್ರೀಯ ನೃತ್ಯ ಸಂಗೀತೋತ್ಸವ 2023 ಕಾರ್ಯಕ್ರಮದ ಮೊದಲ ದಿನ ಕೇರಳದ ಶೀನಾ ಸುನೀಲ್‌ಕುಮಾರ್‌ ಅವರ ತಂಡ ಕೂಚಿಪುಡಿ ಪ್ರದರ್ಶನ, ಬೆಂಗಳೂರಿನ ಶಿವೋಹಂ ತಂಡದ ಅನಿಲ್‌ ಅಯ್ಯರ್‌ ಮತ್ತು ತಂಡ ಭರತನಾಟ್ಯ ನಡೆಸಿಕೊಟ್ಟರು.

ಸಾಗರ ಬಳಸಗೋಡಿನ ನಮನ ಎಸ್‌, ಕಾವ್ಯಾ ಹಾಗೂ ಪ್ರಜ್ಞಾ ಅವರು ಯೋಗ ಪ್ರದರ್ಶನ, ಮಲೇಷಿಯಾದ ಡಾ. ಗಣೇಶನ್‌ ಅವರು ಭರತನಾಟ್ಯ, ಬೆಂಗಳೂರಿನ ಶೀಲಾ ಚಂದ್ರಶೇಖರ್‌ ಅವರು ಭರತನಾಟ್ಯ ಪ್ರದರ್ಶನ ನೀಡಿದರು. ಜಾನಪದ ಕಲಾವಿದ ಜೋಗಿಲ ಸಿದ್ದರಾಜು, ಆನಂದ ಮಾದಲಗೆರೆ, ನಾಗರಾಜ ಅವರ ತಂಡ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಬೆಂಗಳೂರು, ಕೇರಳ, ಮಲೇಷಿಯಾ ಸೇರಿ ವಿವಿಧೆಡೆಯಿಂದ ಆಗಮಿಸಿದ್ದ ಕಲಾವಿದರು ನೀಡಿದ ವೈವಿಧ್ಯ ನೃತ್ಯ ಪ್ರಕಾರಗಳು ಎಲ್ಲರ ಮೆಚ್ಚುಗೆ ಪಡೆದವು. ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಶಾಸಕ ಹರತಾಳು ಹಾಲಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಜಾನಪದ ಕಲಾವಿದ ಜೋಗಿಲ ಸಿದ್ದರಾಜು , ಪರಿಣಿತಿ ಕಲಾಕೇಂದ್ರದ ವಿದ್ವಾನ್‌ ಎಂ.ಗೋಪಾಲ್‌, ಪರಿಣಿತಿ ಕಲಾಕೇಂದ್ರದ ಗೌರವಾಧ್ಯಕ್ಷೆ ವೀಣಾ ಬೆಳೆಯೂರು, ಸಾಗರ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್‌, ಉದ್ಯಮಿ ಟಿ.ವಿ.ಪಾಂಡುರಂಗ, ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕ ಕೆ.ಸಿದ್ದಪ್ಪ, ಡಾ. ಗಣೇಶನ್‌, ಆನಂದ ಮಾದಲಗೆರೆ, ನಾಗರಾಜ ಮತ್ತಿತರರು ಉಪಸ್ಥಿತರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

digimalenadu

ಶಿವಮೊಗ್ಗ
error: Content is protected !!