ಪ್ರಕೃತಿ ಮಹತ್ವದ ಅರಿವು ಅಗತ್ಯ

ಪ್ರಕೃತಿ ಮಹತ್ವದ ಅರಿವು ಅಗತ್ಯ

ಶಿವಮೊಗ್ಗ | 17 ಅಕ್ಟೋಬರ್ 2022 | ಡಿಜಿ ಮಲೆನಾಡು.ಕಾಂ

ಅತಿಯಾದ ಅಭಿವೃದ್ಧಿ ಯೋಜನೆ ಕಾಮಗಾರಿಯಿಂದ ಪ್ರಾಕೃತಿಕ ಸೊಬಗು ಕಣ್ಮರೆಯಾಗುತ್ತಿದ್ದು, ಇಂದಿನ ಯುಗದ ಮಕ್ಕಳಿಗೆ ನೈಸರ್ಗಿಕ ಪ್ರಕೃತಿಯ ಪರಿಚಯವೇ ಮಾಡಲು ಸಾಧ್ಯವೇ ಇಲ್ಲದ ವಾತಾವರಣ ನಿರ್ಮಾಣ ಆಗುತ್ತಿದೆ ಎಂದು ಇಕೋ ವಾಚ್‌ ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ ಕೇಂದ್ರದ  ಅಧ್ಯಕ್ಷ ಸುರೇಶ್‌ ಹೆಬ್ಳಿಕರ್ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಶಿವಮೊಗ್ಗ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ರೋಟರಿ ವಲಯ 11ರ ಎಲ್ಲ ಕ್ಲಬ್‌ಗಳ ಸಹಯೋಗದಲ್ಲಿ ಪರಿಸರ ಮತ್ತು ಭೂಸಂರಕ್ಷಣಾ ಜಿಲ್ಲಾ ಸಮಾವೇಶ ವಸುಂಧರೆ 2022  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪರಿಸರ ಸಂರಕ್ಷಣೆ ಬಗ್ಗೆ ಜಾಗತಿಕ ಮಟ್ಟದಲ್ಲಿ ಆಲೋಚನೆ ನಡೆಸುವ ಅವಶ್ಯಕತೆ ಇದೆ. ಪರಿಸರ ಸಂರಕ್ಷಣೆಯ ಪ್ರತಿಯೊಂದು ಅನುಷ್ಠಾನವನ್ನು ಸ್ಥಳೀಯ ಮಟ್ಟದಲ್ಲಿ ಅನುಷ್ಠಾನ ಮಾಡುವ ಬಗ್ಗೆ ಎಲ್ಲರೂ ಚಿಂತನೆ ನಡೆಸಬೇಕಿದೆ. ಪ್ರಕೃತಿ ಸಂರಕ್ಷಣೆಯ ಮಹತ್ವ ಅರಿತುಕೊಳ್ಳಬೇಕಿದೆ ಎಂದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಸರ್ಜಿ ಫೌಂಡೇಷನ್‌ ಮ್ಯಾನೇಜಿಂಗ್‌ ಟ್ರಸ್ಟಿ ಡಾ. ಧನಂಜಯ ಸರ್ಜಿ ಮಾತನಾಡಿ, ನೀರು, ಗಾಳಿ, ಆಹಾರ ಸೇರಿದಂತೆ ಪರಿಸರ ಕಲುಷಿತಗೊಳ್ಳುತ್ತಿದೆ. ನಾವೆಲ್ಲರೂ ಕಲುಷಿತ ಆಹಾರ ಪದಾರ್ಥವನ್ನೇ ಸೇವನೆ ಮಾಡುತ್ತಿದ್ದೇವೆ. ಒಂದು ಅಧ್ಯಯನದ ಪ್ರಕಾರ ಒಬ್ಬ ಮನುಷ್ಯ ಎಟಿಎಂ ಕಾರ್ಡ್‌ನಷ್ಟು ಪ್ಲಾಸ್ಟಿಕ್‌ಅನ್ನು ವರ್ಷಕ್ಕೆ ಸೇವನೆ ಮಾಡುತ್ತಿದ್ದಾನೆ ಎಂದು ಹೇಳಿದರು.

ರೋಟರಿ ಜಿಲ್ಲಾ ಗವರ್ನರ್‌ ಡಾ. ಜಯಗೌರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯರು ನಮಗೆ ಇರುವುದು ಒಂದೇ ಭೂಮಿ ಎನ್ನುವುದನ್ನು ಅರಿತುಕೊಳ್ಳಬೇಕು. ಪ್ಲಾಸ್ಟಿಕ್‌ ಸೇರಿದಂತೆ ಎಲ್ಲ ರೀತಿಯ ತ್ಯಾಜ್ಯಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಬಗ್ಗೆ ಆಲೋಚನೆ ನಡೆಸಬೇಕು. ಉತ್ತಮ ಪರಿಸರ ನಿರ್ಮಾಣ ಮಾಡಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ತಿಳಿಸಿದರು.

ಪ್ರಿಸರ್ವ್‌ ಪ್ಲಾನೆಟ್‌ ಅರ್ಥ್‌ ಅಧ್ಯಕ್ಷ ವಸಂತ್‌ ಹೋಬಳಿದಾರ್ ಮಾತನಾಡಿ, ಪ್ರಕೃತಿ ವಿರೋಧಿ ಕೃತ್ಯಗಳನ್ನು ಅರಿತುಕೊಳ್ಳಲು, ಅಂತರ್ಜಲ ಜಾಗೃತಿ, ಜಾಗತಿಕ ತಾಪಮಾನ ಏರಿಕೆ ಪರಿಣಾಮದಿಂದ ಆಗುತ್ತಿರುವ ಸಮಸ್ಯೆಗಳು ಮತ್ತು ಅದರ ಪರಿಹಾರದ ಬಗ್ಗೆ ಗಮನ ವಹಿಸಬೇಕಿದೆ ಎಂದು ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್, ವಲಯ 11ರ ಸಹಾಯಕ ಗವರ್ನರ್‌ ಡಾ. ಗುಡದಪ್ಪ ಕಸಬಿ, ಸುನೀತಾ ಶ್ರೀಧರ, ಬಿ.ಸಿ.ಗೀತಾ, ದೇವ್‌ ಆನಂದ್,  ಜಿ.ವಿಜಯಕುಮಾರ್, ಸುಮತಿ ಕುಮಾರಸ್ವಾಮಿ, ಸತೀಶ್‌ ಚಂದ್ರ, ಡಾ. ನಾರಾಯಣ ಶೆಣೈ, ಅನಿಲ್ ಕುಮಾರ್‌ ನಾಡಿಗೇರ್‌, ಅಖಿಲೇಶ್‌ ಚಿಪ್ಪಳಿ, ಚಂದ್ರು, ಆದಿತ್ಯ, ಮನೋಜ್‌ಕುಮಾರ್‌, ಪುಟ್ಟಪ್ಪ, ಪ್ರಮೀಳಾ, ಮಂಜು ಉಪಸ್ಥಿತರಿದ್ದರು.

digimalenadu

ಶಿವಮೊಗ್ಗ
error: Content is protected !!