ಐತಿಹಾಸಿಕ ಶ್ರೇಷ್ಠ ಪರಂಪರೆ ಹೊಂದಿರುವ ದೇಶ ಭಾರತ, ಹೊಸಗುಂದ ಉತ್ಸವ ಕಾರ್ಯಕ್ರಮ

ಐತಿಹಾಸಿಕ ಶ್ರೇಷ್ಠ ಪರಂಪರೆ ಹೊಂದಿರುವ ದೇಶ ಭಾರತ, ಹೊಸಗುಂದ ಉತ್ಸವ ಕಾರ್ಯಕ್ರಮ

ಸಾಗರ | 22 ನವೆಂಬರ್ 2022 | ಡಿಜಿ ಮಲೆನಾಡು.ಕಾಂ

ಭಾರತ ದೇಶ ವೈವಿಧ್ಯಮಯ ಸಂಸ್ಕೃತಿ ಪರಂಪರೆ ಹಾಗೂ ವಿಶೇಷತೆಗಳಿಂದ ಕೂಡಿದ್ದು, ಆಹಾರ, ಕೃಷಿ, ಕಲೆ, ಐತಿಹಾಸಿಕ ಶ್ರೇಷ್ಠತೆಯು ವಿಶ್ವದ ಗಮನ ಸೆಳೆದಿದೆ ಎಂದು ಅಮೇರಿಕಾ ನಿವಾಸಿ, ಉದ್ಯಮಿ ಕಮಲ್‌ ಗೋಯಲ್ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪ ಹೊಸಗುಂದದ ಇತಿಹಾಸ ಪ್ರಸಿದ್ಧ ಶ್ರೀ ಉಮಾಮಹೇಶ್ವರ ದೇವಾಲಯ ಮತ್ತು ಪರಿವಾರ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ಹೊಸಗುಂದ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೊಸಗುಂದ ವಾಸ್ತುಶೈಲಿ, ಸಂಸ್ಕೃತಿ ಅಧ್ಯಯನಕ್ಕೆ ವಿಫುಲ ಅವಕಾಶಗಳಿವೆ. ಧಾರ್ಮಿಕ ಕ್ಷೇತ್ರದ ಶ್ರೇಷ್ಠ ಪರಂಪರೆ, ಸನಾತನ ಆಚರಣೆಗಳು ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳಲು ಸಹಕಾರಿ ಆಗುತ್ತವೆ ಎಂದು ತಿಳಿಸಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್‌ ಮ್ಯಾನೇಜಿಂಗ್‌ ಟ್ರಸ್ಟಿ ಸಿ.ಎಂ.ಎನ್.ಶಾಸ್ತ್ರಿ ಮಾತನಾಡಿ, ಹೊಸಗುಂದ ಉತ್ಸವದ ಮೂಲಕ ಸ್ಥಳೀಯ ಕಲಾವಿದರಿಗೆ ವೇದಿಕೆ ಒದಗಿಸುವ ಕೆಲಸ ಮಾಡುತ್ತಿದ್ದೇವೆ. ಪ್ರತಿ ವರ್ಷ ಹೊಸಗುಂದ ಉತ್ಸವ ಯಶಸ್ವಿಯಾಗಿ ನಡೆಯುತ್ತಿದ್ದು, ನೂರು ದೀಪಗಳಿಂದ ಆರಂಭವಾದ ದೀಪೋತ್ಸವ ಇದೀಗ ಪ್ರತಿ ವರ್ಷ ಲಕ್ಷ ದೀಪೋತ್ಸವ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಹೊಸಗುಂದ ಉತ್ಸವ ಪ್ರಯುಕ್ತ ಸೋಮವಾರ ವಿಶೇಷ ಧಾರ್ಮಿಕ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶ್ರೀ ಸದ್ಗುರು ಭಜನಾ ಮಂಡಳಿ ಸಾಗರ ಅವರಿಂದ ಭಜನಾ ಸೇವೆ, ನಿರ್ಮಲಾ ಸುರೇಶ್‌ ಸಂಗಡಿಗರಿಂದ ಶ್ರೀ ರಾಮ ನೃತ್ಯ ಸೇವೆ, ಕಲಾಸಿಂಚನ ಸಾಂಸ್ಕೃತಿಕ ವೇದಿಕೆ ಸಾಗರ ಅವರಿಂದ ಜಾನಪದ ಸಮೂಹ ಗಾಯನ ಸೇವೆ, ಪ್ರಣಮ್ಯ ಎಂ.ಜಂಬೆಕೊಪ್ಪ ಅವರಿಂದ ಭರತನಾಟ್ಯ ಸೇವೆ ಹಾಗೂ ಜಯಂತಿ ಹೆಗ್ಡೆ ಹಾಗೂ ಸಂಗಡಿಗರಿಂದ ಅಂಟಿಕೆ ಪಿಂಟಿಕೆ ಜಾನಪದ ಹಾಡು ಸೇವೆ ನಡೆಯಿತು.

ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್‌ ಸ್ಥಾಪಕ ಟ್ರಸ್ಟಿ ಶೋಭಾ ಎನ್.ಶಾಸ್ತ್ರಿ, ಜ್ಯೋತಿ ಕೋವಿ, ಪ್ರಗತಿಪರ ಕೃಷಿಕರು ಜಯಲಕ್ಷ್ಮೀ ಮೇದರವಳ್ಳಿ, ಲೋಕೇಶ್‌ ಐಗಿನಬೈಲು, ಸುರೇಶ್‌ ಕೆ.ವಿ, ದಿನೇಶ್‌, ಎನ್‌.ಡಿ.ಹೆಗ್ಡೆ, ಲತಾ ಹೊಸಗುಂದ, ಗಣಪತಿ, ದೇವಾಲಯದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.

digimalenadu

ಶಿವಮೊಗ್ಗ
error: Content is protected !!