ಜೀವನಶೈಲಿಯಲ್ಲಿ ಸರಳ ಬದಲಾವಣೆಗಳಿಂದ ಉತ್ತಮ ಆರೋಗ್ಯ
ಶಿವಮೊಗ್ಗ | 8 ಆಗಸ್ಟ್ 2025 | ಡಿಜಿ ಮಲೆನಾಡು.ಕಾಂ
ಜೀವನಶೈಲಿಯಲ್ಲಿ ಸರಳ ಬದಲಾವಣೆ ಮಾಡಿಕೊಳ್ಳುವುದರಿಂದ ಔಷಧವಿಲ್ಲದೆ ಸಹ ಡಯಾಬಿಟಿಸ್ ನಿಯಂತ್ರಣ ಸಾಧ್ಯ ಎಂದು ಡಾ. ಪ್ರೀತಮ್ ಬಿ. ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ : https://whatsapp.com/channel/0029Vaf6LKjHbFV2qoWkPx0G
ರೋಟರಿ ಕ್ಲಬ್ ಶಿವಮೊಗ್ಗ ರಿವರ್ಸೈಡ್ ಭವನದಲ್ಲಿ ಆರೋಗ್ಯದ ಮಹತ್ವ ಬಿಂಬಿಸುವ ಡಯಾಬಿಟಿಸ್ ರಿವರ್ಸಲ್ ವಿಷಯ ಕುರಿತು ಮಾತನಾಡಿ, ರೋಗ ಬಂದ ಮೇಲೆ ಮಾತ್ರ ಚಿಕಿತ್ಸೆ ಪಡೆಯುವುದಕ್ಕಿಂತ ಆರೋಗ್ಯ ಶಿಸ್ತಿನಿಂದಲೇ ಪರಿಹಾರ ಹುಡುಕಬೇಕು ಎಂದು ತಿಳಿಸಿದರು.
ಆಹಾರವೇ ಔಷದಿ ಕುರಿತ ವೈಜ್ಞಾನಿಕ ದೃಷ್ಟಿಕೋನವನ್ನು ಅತ್ಯಂತ ಸರಳವಾಗಿ ವಿವರಿಸಿದರು. ಪಿಪಿಟಿ ಪ್ರಸ್ತುತಿ, ಜೀವನದ ಉದಾಹರಣೆಗಳು, ಆರೋಗ್ಯದ ಮೂಲ ತತ್ವಗಳ ಬಗ್ಗೆ ಮಾಹಿತಿ ನೀಡಿದರು.
ರೋಟರಿ ಕ್ಲಬ್ ಶಿವಮೊಗ್ಗ ರಿವರ್ಸೈಡ್ ಅಧ್ಯಕ್ಷ ಕೆ.ಎಸ್. ವಿಶ್ವನಾಥ ನಾಯಕ ಮಾತನಾಡಿ, ಆರೋಗ್ಯವೇ ಬದುಕಿನ ಮೂಲ ಎನ್ನುವುದರನ್ನು ಅರಿತುಕೊಳ್ಳಬೇಕು. ಆಹಾರ ಮತ್ತು ಜೀವನಶೈಲಿ ಶಿಸ್ತಿನ ಕುರಿತು ಸರಳವಾಗಿ ಅನುಸರಿಸಬೇಕು ಎಂದರು.
ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ ಅವರು ಉತ್ತುಂಗ ಪತ್ರಿಕೆಯನ್ನು ಬಿಡುಗಡೆ ಮಾಡಿ ಕ್ಲಬ್ನ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಲಯ ಸೇನಾನಿ ಎಸ್.ಪಿ.ಶಂಕರ್ ಅವರು ಸೇವೆಯೊಂದಿಗೆ ಆರೋಗ್ಯದ ಚಟುವಟಿಕೆಗಳು ಕುರಿತು ಮಾತನಾಡಿದರು.
ಡಿಜಿಮಲೆನಾಡು.ಕಾಂ | ಇ-ಮೇಲ್ : digimalenadu@gmail.com
Like & Follow Facebook Page ” Digi Malenadu “
ರೋಟರಿ ಕ್ಲಬ್ ಶಿವಮೊಗ್ಗ ರಿವರ್ಸೈಡ್ ಕಾರ್ಯದರ್ಶಿ ನಿತಿನ್ ಯಾದವ್, ನಿಕಟಪೂರ್ವ ಅಧ್ಯಕ್ಷ ಎಂ.ಆರ್.ಬಸವರಾಜ್, ಇನ್ನರ್ ವ್ಹೀಲ್ ಕ್ಲಬ್ನ ಅಧ್ಯಕ್ಷೆ ಶೀಲಾ ಸುರೇಶ್, ಕಾರ್ಯದರ್ಶಿ ರೂಪಾ ರವಿ, ಮಾಜಿ ಅಧ್ಯಕ್ಷ ಎಂ.ಪಿ.ಆನಂದಮೂರ್ತಿ, ಜಗನ್ನಾಥ್, ಎಂ.ನಾಗರಾಜ್, ಡಾ. ಎಚ್.ಎಲ್.ಮಹೇಂದ್ರ, ಸಿ.ಎನ್.ಮಲ್ಲೇಶ್, ಎಂ.ಆರ್.ಬಸವರಾಜ್, ಉದಯಕುಮಾರ್, ಯೋಗ ಕೇಂದ್ರದ ಸದಸ್ಯರು, ರೋಟರಿ ಕುಟುಂಬದ ಸದಸ್ಯರು ಹಾಜರಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/JqXjFMwXzil6h4ePQU7iyo
ಡಿಜಿ ಮಲೆನಾಡು ವಾಟ್ಸಪ್ ಚಾನಲ್ ಜಾಯಿನ್ ಆಗಿರಿ https://whatsapp.com/channel/0029Vaf6LKjHbFV2qoWkPx0G
ಫೇಸ್ ಬುಕ್ :www.facebook.com/digimalenadu
ನಮ್ಮ ಬಗ್ಗೆ :https://digimalenadu.com/about-us/
